Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ್ ಎಸ್. ಗುಡ್ಡದ್ ವರ್ಗಾವಣೆ - ಆತ್ಮೀಯ ಬೀಳ್ಕೊಡುಗೆ

ಹೊಸನಗರ : ಸರ್ಕಾರಿ ನೌಕರರಿಗೆ ವರ್ಗಾವಣೆ ಸಾಮಾನ್ಯ ಹಾಗೂ ಅನಿವಾರ್ಯ ಎಂದು ಪದೋನ್ನತಿ ಹೊಂದಿ ವಿಜಯಪುರ ಜಿಲ್ಲೆಯ ಮಹಾನಗರ ಪಾಲಿಕೆಗೆ ವರ್ಗಾವಣೆ ಹೊಂದಿದ ಇಲ್ಲಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ್ ಎಸ್. ಗುಡ್ಡದ್ ತಿಳಿಸಿದರು.

ವರ್ಗಾವಣೆ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಸರ್ಕಾರಿ ದಾಖಲೆಗಳಲ್ಲಿ ಸಿಬ್ಬಂದಿಗಳು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಕಾರಣ ಇದು ಸಾರ್ವಜನಿಕ ದಾಖಲೆಗಳಾಗಿದೆ. ಜನಸಾಮಾನ್ಯರಿಗೂ ದಾಖಲೆಯ ಸ್ಥಿತಿ ಅರಿವಾಗುವಂತೆ ಜತನದಿಂದ ದಾಖಲೆಗಳನ್ನು ಕಾಯ್ದುಕೊಳ್ಳುವ ಗುರುತರ ಜವಾಬ್ದಾರಿ ಸಿಬ್ಬಂದಿಗಳ ಮೇಲಿದೆ. ತಾವು ಕರ್ತವ್ಯ ನಿರ್ವಹಿಸದ ವೇಳೆಯಲ್ಲಿ ಸಹಕಾರ ನೀಡಿದ ಸಿಬ್ಬಂದಿಗಳು, ಜನಪ್ರತಿನಿಧಿಗಳನ್ನು ಅವರು ಮುಕ್ತ ಕಂಠದಿಂದ ಪ್ರಶಂಸಿಸಿದರು.

CLICK ಮಾಡಿ - ಹೊಸನಗರದಲ್ಲಿ ಲೋಕಾಯುಕ್ತ ದಾಳಿ - ಲಂಚ ಪಡೆಯುತ್ತಿದ್ದ ಹೊಸನಗರ ಕೋರ್ಟಿನ ಸಹಾಯಕ ಸರ್ಕಾರಿ ಅಭಿಯೋಜಕ ಕೆ. ರವಿ ನ್ಯಾಯಾಂಗ ಬಂಧನ

ಅಧ್ಯಕ್ಷ ನಾಗಪ್ಪ ಮಾತನಾಡಿ, ಜನಪ್ರತಿನಿಧಿಗಳ ಅಧಿಕಾರ ಶಾಶ್ವತವಲ್ಲ. ಆದರೆ, ಸರ್ಕಾರಿ ಸಿಬ್ಬಂದಿಗಳ ಅಧಿಕಾರ ನಿರಂತರ. ಈ ವೇಳೆಯಲ್ಲಿ ಸಿಬ್ಬಂದಿಗಳು ಜನಪರ ಸೇವೆಗೆ ಮುಂದಾದಲ್ಲಿ ಮಾತ್ರವೇ ನಿವೃತ್ತಿ ಬಳಿಕವೂ ಜನರ ಮನಸ್ಸಿನಲ್ಲಿ ಸ್ಥಿರ ಸ್ಥಾನ ಪಡೆಯಲು ಸಾಧ್ಯವೆಂದರು.

ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯ ಅಶ್ವಿನಿ ಕುಮಾರ್, ಸಿಬ್ಬಂದಿಗಳಾದ ಮಂಜುನಾಥ್, ಗಿರೀಶ್ ಅಭಿಪ್ರಾಯ ಹಂಚಿಕೊಂಡರು.

ನೂತನ ಮುಖ್ಯಾಧಿಕಾರಿ ಸುರೇಶ್, ಸದಸ್ಯರಾದ ಗುರುರಾಜ್, ಗುಲಾಬಿ, ಕೃಷ್ಣವೇಣಿ, ನಿತ್ಯಾನಂದ, ಸಿಬ್ಬಂದಿಗಳಾದ ನೇತ್ರಾವತಿ, ಆಸ್ಮಾ, ಅಕ್ಷತಾ, ಶೃತಿ, ಬಸವರಾಜ್, ಪರಶುರಾಮ, ಉಮಾಶಂಕರ್, ಸರೋಜಾ, ನಾಗರಾಜ್ ಸೇರಿದಂತೆ ಹಲವರು ನಿರ್ಗಮಿತ ಮುಖ್ಯಾಧಿಕಾರಿ ಉಮೇಶ್ ಎಸ್. ಗುಡ್ಡದ್ ಅವರಿಗೆ ಶುಭ ಕೋರಿ ಬೀಳ್ಕೊಟ್ಟರು.

ಕಾಮೆಂಟ್‌ಗಳಿಲ್ಲ