Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಭಾರೀ ಮಳೆ, ವಿದ್ಯುತ್‌ ವೈಫಲ್ಯದ ನಡುವೆಯೂ ಹೊಸನಗರದಲ್ಲಿ ನಗುವಿನ ಒಡೆಯ ಪುನೀತ್ ರಾಜ್‌ಕುಮಾರ್‌ 2ನೇ ವರ್ಷದ ಪುಣ್ಯ ಸ್ಮರಣೆ

ಹೊಸನಗರ : ಕರುನಾಡ ರಾಜರತ್ನ, ನಗುವಿನ ಪರಮಾತ್ಮ ಪವರ್ ಸ್ಟಾರ್ ಡಾ. ಪುನೀತ್ ರಾಜ್‌‌ಕುಮಾರ್‌‌ರವರ ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಭಾನುವಾರ ರಾತ್ರಿ ಭಾರಿ ಮಳೆ ಹಾಗೂ ವಿದ್ಯುತ್ ವೈಫಲ್ಯದ ನಡುವೆಯೂ, ಪಟ್ಟಣದ ಕರ್ನಾಟಕ ರತ್ನ ಪುನೀತ್ ರಾಜ್‌‌ಕುಮಾರ್ ಕನ್ನಡ ಸಂಘದವರು ಮೆಸ್ಕಾಂ ಹಾಗು ಅರಣ್ಯ ಇಲಾಖೆ ಎದುರಿನ ಡಾ ಪುನೀತ್ ರಾಜ್‌‌ಕುಮಾರ್ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮೇಣದಬತ್ತಿ ಬೆಳಗುವ ಮೂಲಕ ಅವರನ್ನು ಸ್ಮರಿಸಿ ಅವರ ಆದರ್ಶಗಳನ್ನು ಕೊಂಡಾಡಿದರು.

ಇಂದಿರಾಗಾಂಧಿ ವಸತಿ ಶಾಲೆಯ ಚಂದ್ರಶೇಖರ್, ಕೆ. ಪಿ. ಮಾಲ್ತೇಶ್, ಅರವಿಂದ, ನಾಗರಾಜ, ಕಾಳಿಕಾಪುರ ಗಣೇಶ್, ವನಜಾಕ್ಷಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿ, ಪ್ರಪಂಚದಾದ್ಯಂತದ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿರುವ ಪುನೀತ್‌ ರಾಜ್‌ಕುಮಾರ್‌ ಅವರೊಬ್ಬ ದೇವತಾ ಮನುಷ್ಯ. ಬದುಕಿರುವವರನ್ನು ಮರೆಯುವ ಈ ಕಾಲದಲ್ಲಿ ಅಜರಾಮರವಾಗಿ ಎಲ್ಲರ ಮನಸ್ಸು ಮನೆಯಲ್ಲೂ ದೇವರಾಗಿ ಉಳಿದ ಏಕೈಕ ವ್ಯಕ್ತಿತ್ವ ಪುನೀತ್ ರಾಜಕುಮಾರ್ ಅವರದ್ದಾಗಿದೆ ಎಂದರು. ಅವರ ಆದರ್ಶ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ ಅಪ್ಪು ಆತ್ಮಕ್ಕೆ ಚಿರಶಾಂತಿ ಕೋರಲು ಒಂದು ನಿಮಿಷ ಮೌನ ಆಚರಿಸಲಾಯಿತು.

ಕಾಮೆಂಟ್‌ಗಳಿಲ್ಲ