Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಎಂ.ಗುಡ್ಡೇಕೊಪ್ಪ ಪಿಡಿಓ ರವಿ.ಎಸ್. ವಿರುದ್ಧ ಭ್ರಷ್ಟಾಚಾರದ ಆರೋಪ - ಕೊನೆಗೂ ತನಿಖೆಗೆ ಮುಂದಾದ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿಗಳ ತಂಡ

ಹೊಸನಗರ : ತಾಲ್ಲೂಕಿನ ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯಯೋರ್ವರು, ಇಲ್ಲಿನ ಪಿಡಿಓ ರವಿ. ಎಸ್ ವಿರುದ್ಧ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಲಿಖಿತ ದೂರು ನೀಡಿದ ಹಲವು ದಿನಗಳ ಬಳಿಕ ಇಂದು ಗ್ರಾಮ ಪಂಚಾಯಿತಿ ಕಚೇರಿಗೆ ಜಿಲ್ಲಾ ಪಂಚಾಯಿತಿ ಲೆಕ್ಕ ಪರಿಶೋಧನಾ ತಂಡದ ಅಧಿಕಾರಿಗಳು ದಿಢೀರ್ ಭೇಟಿ ನೀಡಿ, ಪರಿಶೀಲನೆಗೆ ಮುಂದಾಗಿರುವುದು ಗ್ರಾಮಸ್ಥರ ಕೌತುಕಕ್ಕೆ ಕಾರಣವಾಗಿದೆ.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ಕಳೆದ ಒಂದೂವರೆ ವರ್ಷದಿಂದ ಪಿಡಿಓ ರವಿಯವರ ಅಧಿಕಾರಾವಧಿಯಲ್ಲಿ ಸಾಮಾನ್ಯ ಸಭೆಯ ನಡಾವಳಿ ದಾಖಲಿಸಲು ವಿಳಂಬ ಧೋರಣೆ ತಾಳಿರುವುದು, ವರ್ಗ-1ರಲ್ಲಿ ಸುಮಾರು ರೂ. 3 ಲಕ್ಷ ಮೊತ್ತದ ನಕಲಿ ಬಿಲ್ ಸೃಷ್ಟಿಸಿ ಹಣ ದೋಚಿರುವುದು, 25% ಅನುದಾನದಲ್ಲೂ ಅಕ್ರಮ, ಗ್ರಾಹಕರಿಗೆ ಮೂಲಭೂತ ಸೌಕರ್ಯಗಳನ್ನುನೀಡದೆ ವಂಚಿಸಿರುವ ಪಂಚಾಯಿತಿ ವ್ಯಾಪ್ತಿಯ ಖಾಸಗಿ ಲೇಔಟ್ ಮಾಲೀಕರಿಗೆ ಕಾನೂನು ಬಾಹಿರವಾಗಿ ಇ-ಸ್ವತ್ತು ಹಂಚಿಕೆ ಮಾಡಿದ್ದಾರೆ ಎನ್ನುವುದು ಸೇರಿದಂತೆ ಹಲವು ಗಂಭೀರ ಆರೋಪವುಳ್ಳ ದೂರುಗಳನ್ನು ಲಿಖಿತ ರೂಪದಲ್ಲಿ ಸದಸ್ಯ ಮಹೇಂದ್ರ ಜಿಲ್ಲಾ ಪಂಚಾಯಿತಿ ಸಿಇಓಗೆ ನೀಡಿದ್ದರು.

CLICK ಮಾಡಿ - ಹೊಸನಗರ ಬ್ರದರ್ಸ್‌ ಅಂಬೇಡ್ಕರ್‌ ಟ್ರೋಫಿ ಟೆನ್ನಿಸ್ ಬಾಲ್ ಕ್ರಿಕೆಟ್‌ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು - ಸಂಬಂಧಗಳ ಬೆಸುಗೆಗೆ‌ ಕ್ರೀಡಾಕೂಟ ಸಹಕಾರಿ : ಬೇಳೂರು

ಕಳೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ಈ ವಿಷಯ ಮಾರ್ಧನಿಸಿತ್ತು. ಪರ-ವಿರೋಧ ಚರ್ಚೆ ತಾರಕ್ಕೇರಿತ್ತು. ಇದೇ ಪ್ರಥಮ ಬಾರಿಗೆ ಸಾಮಾನ್ಯ ಸಭೆಯ ನಡಾವಳಿಯನ್ನು ಅನ್ ಲೈನ್ ಮೂಲಕ ದಾಖಲಿಸುವ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎನ್. ಪ್ರವೀಣ್ ಮುನ್ನುಡಿ ಬರೆದಿದ್ದರು. ಅಲ್ಲದೆ, ಪಿಡಿಓ ರವಿ ಕಾರ್ಯವೈಖರಿ ಕುರಿತಂತೆ ಅಸಮಾಧಾನ ವ್ಯಕ್ತ ಪಡಿಸಿ, ಸೂಕ್ತ ತನಿಖೆಗೆ ಕೂಡಾ ಆಗ್ರಹಿಸಿದ್ದರು. ದೂರು ನೀಡಿ ಮೂರ‍್ನಾಲ್ಕು ವಾರಗಳೇ ಕಳೆದರೂ ತನಿಖೆಗೆ ಮುಂದಾಗದ ಜಿಲ್ಲಾ ಪಂಚಾಯಿತಿ ಅಧಿಕಾರಗಳ ಕಾರ್ಯವೈಖರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.

ಶಾಸಕ ಗೋಪಾಲಕೃಷ್ಣ ಬೇಳೂರು ಮಧ್ಯ ಪ್ರವೇಶದಿಂದಾಗಿ ತನಿಖೆ ಚುರುಕುಗೊಂಡಿದೆ ಎಂಬ ಮಾತು ಕೇಳಿಬಂದಿದ್ದು. ಸದಸ್ಯರ ದೂರಿನ ಹಿನ್ನಲೆಯಲ್ಲಿ ತನಿಖಾಧಿಕಾರಿಗಳಾಗಿ ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿಗಳಾದ ಎಂ. ಪ್ರಕಾಶ್ ಹಾಗೂ ಬಿ.ಚಂದ್ರಪ್ಪ ಸಂಬಂಧಪಟ್ಟ ಕಡತಗಳ ಪರಿಶೀಲನೆ ಕೈಗೊಂಡಿದ್ದು, ಶೀಘ್ರದಲ್ಲೇ ದೂರಿನ ಸತ್ಯಾಸತ್ಯತೆ ಕುರಿತು ಜಿಲ್ಲಾ ಪಂಚಾಯತಿ ಸಿಇಓಗೆ ವರದಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. 

ಕಾಮೆಂಟ್‌ಗಳಿಲ್ಲ