ಹೊಸನಗರ ಗೇರುಪುರದ ಎಂ. ಗಣೇಶ್ ರಾಷ್ಟ್ರೀಯ ನೆಟ್ ಬಾಲ್ ತಂಡಕ್ಕೆ ಆಯ್ಕೆ
ಹೊಸನಗರ : ತಾಲ್ಲೂಕಿನ ಗೇರುಪುರದ ಮಂಜಪ್ಪ ಗಣಪ ನಾಯಕ್ ಅವರ ಪುತ್ರ ಎಂ. ಗಣೇಶ ರಾಜಸ್ಥಾನದ ಜೈಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ನೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಗೇರುಪುರದ ಎಂ. ಗಣೇಶ ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ನೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ನಿತಿನ್ ಈ ತಂಡದ ಕೋಚ್ ಆಗಿ ಗಣೇಶ್ ಅವರ ಈ ಸಾಧನೆಗೆ ಕಾರಣವಾಗಿದ್ದಾರೆ.
ಕಾಮೆಂಟ್ಗಳಿಲ್ಲ