Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ ನೂತನ ಮುಖಮಂಟಪ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿದ ಶಾಸಕ ಆರಗ ಜ್ಞಾನೇಂದ್ರ

ಹೊಸನಗರ : ಪ್ರಕೃತಿ ಮಡಿಲಲ್ಲಿ ವಿರಾಜಮಾನ ಆಗಿರುವ ತಾಲ್ಲೂಕಿನ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯು ಭಕ್ತರ ಇಷ್ಟಾರ್ಥ ನೆರವೇರಿಸುವ ಮಲೆನಾಡು ಭಾಗದ ಶಕ್ತಿ ದೇವತೆ ಇದ್ದಂತೆ. ಈ ಕಾರಣಕ್ಕೆ ಜನತೆ ಅಮ್ಮನಘಟ್ಟದ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸುವಂತೆ ಮಾಜಿ ಗೃಹ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಭಕ್ತಾದಿಗಳಿಗೆ ಕರೆ ನೀಡಿದರು.

ವಿಜಯದಶಮಿ ದಿನವಾದ ಇಂದು ರೂ 30 ಲಕ್ಷ ವೆಚ್ಚದಲ್ಲಿ ಕೋಡೂರು ಸಮೀಪ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ನೂತನ ಮುಖಮಂಟಪ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.

'ಕ್ರೈಸ್ತ, ಮುಸ್ಲಿಂ ಸಮುದಾಯಗಳ ಆರಾಧನಾ ಸ್ಥಳದ ಅಭಿವೃದ್ಧಿಗೆ ನೀಡುವಷ್ಟು ಅನುದಾನವನ್ನು ಹಿಂದೂಗಳ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ಸರ್ಕಾರಗಳು ನೀಡದಿರುವುದು ಅತ್ಯಂತ ಶೋಚನೀಯ ಸಂಗತಿ ಎಂದ ಅವರು, ಹಿಂದೂ ದೇವಾಲಯಗಳ ಎಲ್ಲಾ  ಜುಟ್ಟು, ಜನಿವಾರಗಳನ್ನು ಸರ್ಕಾರ ತನ್ನ ಹಿಡಿತದಲ್ಲಿಟ್ಟುಕೊಂಡಿರುವುದೇ ಅವುಗಳ ಸಮಗ್ರ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಿದೆ. ಈ ಕುರಿತು ಶಾಸನಸಭೆಯಲ್ಲಿ ಧ್ವನಿ ಎತ್ತುವ‌ ಅಗತ್ಯವಿದ್ದು, ಜನರಲ್ಲಿ ಜಾಗೃತಿ ಮೂಡಿಸಬೇಕಿದೆ' -  ಆರಗ ಜ್ಞಾನೇಂದ್ರ 

ಮಲೆನಾಡು ಭಾಗದ ಈ ಕ್ಷೇತ್ರವನ್ನು ಒಂದು ಮಾದರಿ ಭಕ್ತಿ-ಶಕ್ತಿ ಕೇಂದ್ರವಾಗಿ ನಿರ್ಮಾಣ ಮಾಡುವ ಜೊತೆಗೆ, ಸುಂದರ ಪರಿಸರ ಪ್ರವಾಸಿತಾಣವಾಗಿಸಲು ವಿಪುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹೆಚ್ಚೆಚ್ಚು ಆಸಕ್ತಿ ವಹಿಸಬೇಕಿದೆ. ಹಲವು ಶತಮಾನಗಳ ಇತಿಹಾಸ ಇರುವ ಈ ದೇವಾಲಯಕ್ಕೆ ಭಕ್ತಾದಿಗಳ ದಂಡೇ ಜಾತ್ರೋತ್ಸವ ವೇಳೆಯಲ್ಲಿ ಹರಿದು ಬರುವುದೇ ಇದಕ್ಕೆ ಸಾಕ್ಷಿ ಎಂದರು.

CLICK ಮಾಡಿ - ಕರ್ನಾಟಕ ಸುವರ್ಣ ಸಂಭ್ರಮ ರಥಕ್ಕೆ ಹೊಸನಗರದಲ್ಲಿ ಅದ್ಧೂರಿ ಸ್ವಾಗತ

ಕ್ರೈಸ್ತ, ಮುಸ್ಲಿಂ ಸಮುದಾಯಗಳ ಆರಾಧನಾ ಸ್ಥಳದ ಅಭಿವೃದ್ಧಿಗೆ ನೀಡುವಷ್ಟು ಅನುದಾನವನ್ನು ಹಿಂದೂಗಳ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ಸರ್ಕಾರಗಳು ನೀಡದಿರುವುದು ಅತ್ಯಂತ ಶೋಚನೀಯ ಸಂಗತಿ ಎಂದ ಅವರು, ಹಿಂದೂ ದೇವಾಲಯಗಳ ಎಲ್ಲಾ  ಜುಟ್ಟು, ಜನಿವಾರಗಳನ್ನು ಸರ್ಕಾರ ತನ್ನ ಹಿಡಿತದಲ್ಲಿಟ್ಟುಕೊಂಡಿರುವುದೇ ಅವುಗಳ ಸಮಗ್ರ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಿದೆ. ಈ ಕುರಿತು ಶಾಸನಸಭೆಯಲ್ಲಿ ಧ್ವನಿ ಎತ್ತುವ‌ ಅಗತ್ಯವಿದ್ದು, ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಜಿ ಶಾಸಕ ಡಾ. ಜಿ.ಡಿ. ನಾರಾಯಣಪ್ಪ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಸಲ್ಲದು. ಆಸ್ತಿಕರ ಶ್ರದ್ಧಾ, ಭಕ್ತಿ ಕೇಂದ್ರಗಳನ್ನು ರಾಜಕೀಯದಿಂದ ದೂರವೇ ಇಡಬೇಕು‌ ಎನ್ನುವ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ. ಸ್ವಾಮಿರಾವ್ ಮಾತನಾಡಿ, ಈಡಿಗ, ದೀವರ ಜನಾಂಗದ ಮನೆ ದೇವರು ಎಂದೇ ಬಿಂಬಿತಗೊಂಡಿರುವ ಈ ಕ್ಷೇತ್ರಕ್ಕೆ ಸರ್ಕಾರದಿಂದ ಸುಮಾರು 25 ಎಕರೆ ಜಾಗ ಮಂಜೂರಾಗಬೇಕಿದೆ. ಕೋಡೂರು-ಅಮ್ಮನಘಟ್ಟಕ್ಕೆ ಜನಸಂದಣಿ ತಡೆಯಲು ಸುಸಜ್ಜಿತ ರಸ್ತೆ ನಿಮಾರ್ಣವಾಗಬೇಕು. ಶ್ರೀ ಕ್ಷೇತ್ರವನ್ನು ಪ್ರಸಿದ್ದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಸೂಕ್ತ ಅನುದಾನ ಬಿಡುಗಡೆ ಮಾಡಿಸಿಕೊಡಬೇಕು. ಅಮ್ಮನಘಟ್ಟದಿಂದ ನೀರೇರಿ, ಮಾರುತೀಪುರ ಗ್ರಾಮಗಳಿಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಬೇಕು. ಹಲವಾರು ದಶಕಗಳಿಂದ ಅಮ್ಮನಘಟ್ಟದ ಸುತ್ತಲ ಕೃಷಿ ನಿರತ ರೈತರಿಗೆ ಬಗರ್‌‌ಹುಕುಂ 

ಜಮೀನು ಮಂಜೂರು ಮಾಡಿಸಬೇಕು ಎಂಬ ಆಗ್ರಹಪತ್ರವನ್ನು ಶಾಸಕ ಜ್ಞಾನೇಂದ್ರ ಅವರಿಗೆ ನೀಡಿದರು. ವೇದಿಕೆಯಲ್ಲಿ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಎ.ವಿ. ಮಲ್ಲಿಕಾರ್ಜುನ ಉಪಸ್ಥಿತರಿದ್ದರು.  

ನೀರೇರಿ ಸಂತೋಷ್ ನಿರೂಪಿಸಿ, ಯೋಗೇಂದ್ರ ಸ್ವಾಗತಿಸಿ, ಕೋಡೂರು ವಿಜೇಂದ್ರರಾವ್ ವಂದಿಸಿದರು.

ಕಾಮೆಂಟ್‌ಗಳಿಲ್ಲ