Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಜಯನಗರದಲ್ಲಿ ’ಈದ್ ಮಿಲಾದ್‌‌ ಜಲ್ಸ’ ಸಂಭ್ರಮ - ಇಡೀ ಊರನ್ನೇ ರೋಮಾಂಚನಗೊಳಿದ ಡಿ.ಎ. ಹಸನ್ ಸಖಾಫಿ ಬೆಜ್ಜವಳ್ಳಿಯವರ ಸೌಹಾರ್ದ ಸಂದೇಶ ಭಾಷಣ

ಹೊಸನಗರ: ಸಮೀಪದ ಜಯನಗರದ ಶಾಫಿ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಮತ್ತು ನೂರುಲ್ ಇಸ್ಲಾಂ ಅರೆಬಿಕ್ ಮದ್ರಸ ಹಾಗೂ ಎಸ್.ಎಸ್.ಇ.ಪಿ.ಎಫ್ ಮತ್ತು ಎಸ್.ವೈ.ಎಸ್. ಜಯನಗರ ಶಾಖೆ ಜಂಟಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1449ರ ಜನ್ಮ ದಿನಾಚರಣೆ ಪ್ರಯುಕ್ತ  ಮೂರು ದಿನಗಳ ಕಾಲ ’ಬೃಹತ್ ಮಿಲಾದ್ ಜಲ್ಸ’ ಕಾರ್ಯಕ್ರಮವು ಜಯನಗರ ಮುಹ್ಯುದ್ದೀನ್ ಮಸ್ಜಿದ್ ಅಂಗಳದಲ್ಲಿ ಅದ್ಧೂರಿಯಾಗಿ ನಡೆಯಿತು.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

27ರ ಶುಕ್ರವಾರದಂದು ಜುಮುಅಃ ನಮಾಝ್‌‌ ನಂತರ ಮುಹ್ಯುದ್ದೀನ್ ಶಾಫಿ ಜುಮುಅಃ ಮಸ್ಜಿದ್‌‌ನ ಖತೀಬರಾದ ಶಾಹುಲ್ ಹಮೀದ್ ಸಖಾಫಿ ನೆಲ್ಯಾಡಿ, ಮುಖ್ಯೋಪಾಧ್ಯಾಯರಾದ ಉಮರುಲ್ ಫಾರೂಖ್ ಸಖಾಫಿ ವಳವೂರು, ಅಧ್ಯಕ್ಷರಾದ ಅಬ್ದುಲ್ ಖಾದರ್ ಬಾಷಾ ಜಯನಗರ ಧ್ವಜಾರೋಹಣ ನಡೆಸಿದರು. ಐ.ಕೆ. ಇಕ್ಬಾಲ್ ಮದನಿ ಕುಕ್ಕೋಟ್ಟುರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಗ್‌‌ರಿಬ್ ನಮಾಝ್‌‌ನ ಬಳಿಕ ನೂರುಲ್ ಇಸ್ಲಾಂ ಅರೆಬಿಕ್ ಮದ್ರಸಾ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್, ಖವಾಲಿ, ಹಾಡು, ಭಾಷಣ ಸೇರಿದಂತೆ ಅನೇಕ ವರ್ಣಮಯ ಕಾರ್ಯಕ್ರಮಗಳು ನಡೆದವು. ಅದರಲ್ಲೂ ನೂರುಲ್ ಇಸ್ಲಾಂ ಅರೆಬಿಕ್ ಮದ್ರಸಾದ 6ನೇ ತರಗತಿಯಲ್ಲಿ ಕಲಿಯುತ್ತಿರುವ ಅಮೀನ್ ಬ್‌‌ನು ಶುಕೂರು, ಅಫ್ರೀದ್ ಬ್‌‌ನು ಯೂಸುಫ್ ಎನ್ನುವ ವಿದ್ಯಾರ್ಥಿಗಳು ರಚಿಸಿದ ‘ಜಯನಗರ ಮುಹ್ಯುದ್ದೀನ್ ಜುಮುಅಃ ಮಸ್ಜಿದ್ ಮತ್ತು ನೂರುಲ್ ಇಸ್ಲಾಂ ಮದ್ರಸ’ದ  ಕ್ರಾಫ್ಟ್ ಹಾಗೂ ಶಝ್‌‌ಫಃ ಬಿಂತ್ ಜಲೀಲ್ ‘ನ‌‌ಅ್‌‌ಲೇ ಮುಬಾರಕ್’ನ ಚಿತ್ರವು ಎಲ್ಲರ ಗಮನ ಸೆಳೆಯಿತು.

ಶನಿವಾರ ಮಗ್ರಿಬ್ ನಮಾಝ್‌‌ನ ಬಳಿಕ ಅಲ್-ಹಾಜ್ ಅಸಯ್ಯಿದ್ ಅಬೂಬಕರ್ ಸಿದ್ಧೀಖ್ ತಙ್ಙಳ್ ಅಲ್-ಹಾದಿ ತೀರ್ಥಹಳ್ಳಿರವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್ ಹಾಗೂ ಮಂಗಳೂರಿನ ಪ್ರಖ್ಯಾತ ಅಲ್-ಅಮೀನ್ ಇಖ್ವಾನ್ ತಂಡದಿಂದ ಬುರ್ದಾ ಮಜ್ಲಿಸ್, ಮಾಸ್ಟರ್ ಸಲ್ಮಾನುಲ್ ಫಾರಿಶ್ ಉಳ್ಳಾಲರವರಿಂದ ನ‌‌ಅ್‌‌ತೇ ಶರೀಫ್, ಎಸ್.ಎಸ್.ಎಫ್ ರಾಷ್ಟೀಯ ಮಟ್ಟದ ವೇದಿಕೆಯಲ್ಲಿ ಮಿಂಚಿದ ಕೋಗಿಲೆ ಕಂಠದ ಪ್ರತಿಭೆ ಮುಹಮ್ಮದ್ ರಾಝಿಖ್ ಮಾವಿನಕಟ್ಟೆ ಗುಲ್ವಾಡಿಯಿಂದ ವಿವಿಧ ಭಾಷೆಗಳಲ್ಲಿ ಪ್ರವಾದಿ ಮದ್‌‌ಹ್ ಗಾನ ನಡೆಯಿತು.

ಭಾನುವಾರ ಬೆಳಿಗ್ಗೆ ಜಯನಗರದ ಶಾಫಿ-ಹನಫಿ ಜಮಾಅತ್‌‌ನವರೆಲ್ಲಾ ಸೇರಿ ಜಯನಗರದ ರಾಜ ಬೀದಿಯಲ್ಲಿ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ ಮೆರವಣಿಗೆ ನಡೆಸಿದರು.

CLICK ಮಾಡಿ - ಹರಿದ್ರಾವತಿಯಲ್ಲಿ ಸಡಗರ ಸಂಭ್ರಮದ ಪೋಷಣ್ ಮಾಸಾಚರಣೆ ಕಾರ್ಯಕ್ರಮ

ಎಸ್.ಎಸ್.ಎಫ್ ಶಿವಮೊಗ್ಗ ಜಿಲ್ಲಾ ಮುಖಂಡ ಡಿ.ಎ. ಹಸನ್ ಸಖಾಫಿ ಬೆಜ್ಜವಳ್ಳಿಯವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಜಗತ್ತಿಗೆ ಸಾರಿದ ಉದಾತ್ತವಾದ ಸಂದೇಶಗಳನ್ನು ಎಳೆ ಎಳೆಯಾಗಿ ವಿವರಿಸುತ್ತಾ ಸೌಹಾರ್ದ ಸಂದೇಶದ ಭಾಷಣ ನೀಡಿದರು. ಪವಿತ್ರ ಖುರ್‌‌ಆನ್‌‌ನಿಂದ, ಪ್ರವಾದಿವರ್ಯರ ಮದೀನಾದ ಪಾಠ ಶಾಲೆಯಿಂದ ಬೋಧಿಸಿದ ತತ್ವಗಳಿಂದ ಶಾಂತಿ, ಸೌಹಾರ್ದ, ಸಹಬಾಳ್ವೆಯ ಬಗ್ಗೆ ಸಮಗ್ರವಾಗಿ ವಿವರಿಸಿದರು. ಇಡೀ ಜಯನಗರವನ್ನೇ ಬೆರಗುಗೊಳಿಸಿದ, ರೋಮಾಂಚನಗೊಳಿಸಿದ ಹಸನ್ ಸಖಾಫಿಯವರ ಸೌಹಾರ್ದ ಸಂದೇಶ ಭಾಷಣವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

ಜಾಥಾದ ಉದ್ದಗಲ ಜಯನಗರದ ಎಸ್.ಎಸ್.ಎಫ್ ಮಕ್ಕಳು ನಡೆಸಿದ ದಫ್ ಪ್ರದರ್ಶನವು ಜಾಥಾ ಆಕರ್ಷಣೆಯನ್ನು ಹೆಚ್ಚಿಸಿತ್ತು.

ಆರೋಗ್ಯ ಇಲಾಖೆಯ ಸಿಸ್ಟರ್‌ ಅನಿತಾ, ಅಂಗನವಾಡಿ ಶಿಕ್ಷಕಿ ನಾಗರತ್ನ, ಆಶಾ ಕಾರ್ಯಕರ್ತೆ ಶುಭ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜಯನಗರ  ಮಸ್ಜಿದ್ ಅಧ್ಯಕ್ಷ ಅಬ್ದುಲ್ ಖಾದರ್ ಬಾಷಾ, ಕಾರ್ಯದರ್ಶಿ ಜೆ.ಎಂ ಸಿದ್ಧೀಖ್, ಕೋಶಾಧಿಕಾರಿ ಹಂಝ, ಜೆ.ಎಂ ಝುಬೈರ್ ಹಾಜಿ, ಹೊಸನಗರ ಶಾಫಿ ಜುಮುಅಃ ಮಸ್ಜಿದ್ ಅಧ್ಯಕ್ಷ ಅಮಾನುಲ್ಲಾ, ಖತೀಬ ಯೂಸುಫ್ ಸಖಾಫಿ ಬನಾರಿ, ಸದ್‌‌ರ್ ಉಸ್ತಾದ್ ಬದ್ರುದ್ದೀನ್ ಝುಹ್‌‌ರಿ ನೊಣಬೂರು, ಉರುಮಾಲ್ ಮಾಸಿಕದ ಸಂಪಾದಕ ಐ.ಕೆ. ಇಕ್ಬಾಲ್ ಮದನಿ, ಕುಕ್ಕೋಟ್ಟು, ಹಿರಿಯರಾದ ಜೆ.ಎಂ ಮುಹಮ್ಮದ್, ಜಯನಗರ ಶಾಖೆ ಎಸ್.ಎಸ್.ಎಫ್ ಅಧ್ಯಕ್ಷ ಶೌಕತ್ ಅಲಿ, ಕಾರ್ಯದರ್ಶಿ ನಾಸಿರ್, ಹನಫೀ ಮಸ್ಜಿದ್ ಇಮಾಂ ಮೌಲಾನಾ ಅಬ್ದುಲ್ ಸಲಾಮ್ ಹಝ್ರತ್, ಅಬೂ ನಿಝಾಂ ಅಮಾನುಲ್ಲಾ ಜಯನಗರ, ಹನಫಿ ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಎಸ್.ವೈ.ಎಸ್ ಅಧ್ಯಕ್ಷ ತೌಫೀಖ್ ಜಯನಗರ, ಉದ್ಯಮಿ ಅಶ್ರಫ್ ಜಯನಗರ ಇನ್ನಿತರರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ