ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷರಾಗಿ ಹೊಸನಗರದ ದತ್ತಾತ್ರೇಯ ಉಡುಪ ಆಯ್ಕೆ
ಹೊಸನಗರ: 2024-2027ನೇ ಸಾಲಿನ ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ (ರಿ) ಉಪಾಧ್ಯಕ್ಷರಾಗಿ ಪಟ್ಟಣದ ಶ್ರೀ ರಾಮಕೃಷ್ಣ ಮೆಡಿಕಲ್ ಮಾಲೀಕ ಎನ್. ದತ್ತಾತ್ರೇಯ ಉಡುಪ ಆಯ್ಕೆ ಆಗಿದ್ದಾರೆ.
ಜುಲೈ 21ರ ಭಾನುವಾರ ಜಿಲ್ಲಾ ಔಷಧ ಭವನದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿಯ ವಿವಿಧ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರು ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
90ರ ದಶಕದ ಆರಂಭದಲ್ಲಿ ಹೊಸನಗರ ಪಟ್ಟಣದ ನೆಹರೂ ರಸ್ತೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ, 1991ರಿಂದ ಸತತವಾಗಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಈ ನಡುವೆ ಮೂರನೇ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವುದು ವಿಶೇಷ.
2024-2027ನೇ ಸಾಲಿಗೆ ನೂತನ ಜಿಲ್ಲಾಧಕ್ಷರಾಗಿ ಶಿವಮೊಗ್ಗದ ಲಕ್ಷ್ಮೀ ಮೆಡಿಕಲ್ಸ್ ಮಾಲೀಕ ಎಸ್.ಪಿ. ಮಧುಕರ್, ಕಾರ್ಯದರ್ಶಿಯಾಗಿ ಮೆಡಿನೋವ ಸರ್ಜಿಕಲ್ ಅಂಡ್ ಫಾರ್ಮಾಸಿಟಿಕಲ್ಸ್ ಮಾಲೀಕ ಈ.ಜಿ. ವೆಂಕಟೇಶ್, ಸಹ ಕಾರ್ಯದರ್ಶಿಯಾಗಿ ಲಕ್ಷ್ಮೀ ಫಾರ್ಮಾ ಡಿಸ್ಟ್ರಿಬ್ಯೂಟರ್ಸ್ ಮಾಲೀಕ ಎಂ.ಎಲ್. ಮಂಜುನಾಥ್, ಖಜಾಂಚಿಯಾಗಿ ರಾಜು ಫಾರ್ಮ್ ಮಾಲೀಕ ಕೆ.ಸಿ.ನಾಗರಾಜ್ ಆಯ್ಕೆಯಾಗಿದ್ದಾರೆ.
ನೂತನ ಕಾರ್ಯಕಾರಿ ಸಮಿತಿಯನ್ನು ಹೊಸನಗರ ತಾಲ್ಲೂಕಿನ ಔಷಧ ವ್ಯಾಪಾರಿಗಳು ಅಭಿನಂದಿಸಿದ್ದಾರೆ.
ಕಾಮೆಂಟ್ಗಳಿಲ್ಲ