ಹೊಸನಗರ ಕಳೂರು ಸೊಸೈಟಿ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ
ಹೊಸನಗರ : ಪಟ್ಟಣದ ಪ್ರತಿಷ್ಠಿತ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 29ರ ಭಾನುವಾರ ನಡೆಯಬೇಕಿದ್ದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಶ್ರೀನಿವಾಸ ಕುಲಾಯಿ (ಪರಿಶಿಷ್ಟ ಜಾತಿ-ಕ್ಷೇತ್ರ 3), ವನಮಾಲ ಕೋಂ ಭೋಜಪ್ಪ (ಮಹಿಳೆ-ಕ್ಷೇತ್ರ-3) ಕೆ.ಆರ್. ಮುರಳೀಧರ (ಸಾಮಾನ್ಯ) ಹಾಗೂ ಎಸ್.ಜಿ. ವಿರೂಪಾಕ್ಷ (ಹಿಂದುಳಿದ ವರ್ಗ ಪ್ರ.ವರ್ಗ ಬಿ- ಕ್ಷೇತ್ರ-3) ಅವಿರೋಧ ಆಯ್ಕೆ ಆಗಿದ್ದಾರೆ.
ಕಾಮೆಂಟ್ಗಳಿಲ್ಲ