ಸಂಪೇಕಟ್ಟೆ ನಿಟ್ಟೂರು - ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನ ಮೇಲೆ ಬಿದ್ದ ವಿದ್ಯುತ್ ಕಂಬ!
ಹೊಸನಗರ : ಬಿರುಗಾಳಿ ಮಳೆಗೆ ಇಂದು ಮುಂಜಾನೆ ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನ ಮೇಲೆ ವಿದ್ಯುತ್ ಕಂಬ ಬಿದ್ದ ಘಟನೆ ತಾಲ್ಲೂಕಿನ ಸಂಪೇಕಟ್ಟೆ ನಿಟ್ಟೂರು ಮಧ್ಯದಲ್ಲಿ ನಡೆದಿದೆ. ಬಸ್ಸಿನ ಒಂದು ಬದಿಗೆ ವಿದ್ಯುತ್ ಕಂಬ, ಲೈನ್ ಜೊತೆಗೇ ಬಿದ್ದರು ಕೂಡಾ ಆ ಸಮಯದಲ್ಲಿ ಕರೆಂಟ್ ಇಲ್ಲದ ಕಾರಣ ಯಾವುದೇ ಅನಾಹುತವಾಗಿಲ್ಲ.
CLICK ಮಾಡಿ - ಹೊಸನಗರ ತಾಲ್ಲೂಕಿನ ಚಕ್ರಾ ನಗರದಲ್ಲಿ ಒಂದೇ ದಿನ ಅತ್ಯಧಿಕ 290 ಮಿಲಿ ಮೀಟರ್ ಮಳೆ - ಶೇಕಡ 71.43 ರಷ್ಟು ಭರ್ತಿಯಾದ ಲಿಂಗನಮಕ್ಕಿ ಡ್ಯಾಮ್
ಬೆಂಗಳೂರಿನಿಂದ ಹೊಸನಗರ - ನಗರ ಮಾರ್ಗವಾಗಿ ಕೆಎಸ್ಸಾರ್ಟಿಸಿ ಬಸ್ಸು ನಿಟ್ಟೂರು ಕಡೆ ತೆರಳುವಾಗ ಈ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬ ಹಾಗೂ ಲೈನ್ನ್ನು ತೆರವುಗೊಳಿಸಿ, ಬಸ್ಸಿನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕಾಮೆಂಟ್ಗಳಿಲ್ಲ